Friday, January 31, 2014

ನಗರದಲ್ಲಿ ಕುಡಿಯುವ ನೀರು ಯೋಜನೆಯ ವಾಟರ್ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಹೆಚ್.ವೈ.ಸತೀಶ್ ಗೌಡ
ಬಿದನೂರು: ಅತಿ ಹೆಚ್ಚು ವಾಷಿ೯ಕ ಮಬೀಳುವ ಮಲೆನಾಡಿನ ಪ್ರದೇಶದಲ್ಲೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿರುವುದು ಆತಂಕಕಾರಿ ಎಂದು ಜಿಲ್ಲಾಪಂಚಾಯ್ತಿ ಸದಸ್ಯೆ ಶುಭಾ ಕೃಷ್ಣಮೂತಿ೯ ಹೇಳಿದರು.
ನಗರದಲ್ಲಿ ವಾಟರ್ ಟ್ಯಾಂಕ್ ಗೆ ಶುಭಾಕೃಷ್ಣಮೂರ್ತಿ ಶಂಕುಸ್ಥಾಪನೆ ನೆರವೇರಿಸದರು.
ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ನಗರದಲ್ಲಿ 15 ಲಕ್ಷ ರೂ ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಯ ವಾಟರ್ ಟ್ಯಾಂಕ್ಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಲೆನಾಡಿನಲ್ಲಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗುತ್ತಿದ್ದರೂ ಬೇಸಿಗೆಯಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ಹಾಗಾಗಿ ಮಲೆನಾಡಿನಲ್ಲೂ ಬಾವಿ ಮತ್ತು ಕುಡಿಯುವ ನೀರು ಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ತಮ್ಮ ಅಧಿಕಾರಾವಧಿಯಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ್ದು, ಉಳಿದವುಗಳನ್ನೂ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದರು.
ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಸತೀಶ್ ಹೆಂಡೆಗದ್ದೆ, ಉಪಾಧ್ಯಕ್ಷೆ ಶಾಲಿನಿ ಜೋಗಿ, ಪ್ರಮುಖರಾದ ಕೆ.ವಿ.ಕೃಷ್ಣಮೂತಿ೯, ಕವಿರಾಜ್ ಕಾನ್ಬೈಲ್, ರಾಜಣ್ಣ ನಿಲ್ಸ್ಕಲ್, ಅರುಣಾಚಲ ಚಿಕ್ಕಪೇಟೆ, ಸುಬ್ರಹ್ಮಣ್ಯ ಭಾಗವತ್, ಗುರುಪ್ರಸಾದ್ ಮತ್ತಿತರರಿದ್ದರು.


No comments:

Post a Comment