Friday, January 31, 2014

ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸೈಕಲ್ ವಿತರಿಸಿದ ಜಿಪಂ ಸದಸ್ಯೆ ಶುಭಾ ಕೃಷ್ಣಮೂರ್ತಿ

ಶಿಕ್ಷಣಕ್ಕಾಗಿ ಸೈಕಲ್ ಸದುಪಯೋಗ ಪಡೆದುಕೊಳ್ಳಲು ಕರೆ
ಶುಭಾ ಕೃಷ್ಣಮೂರ್ತಿ

ಬಿದನೂರು: ಉತ್ತಮ ಶಿಕ್ಷಣ ಮತ್ತು ಎಲ್ಲರಿಗೂ ಶಿಕ್ಷಣ ನೀಡಬೇಕು ಎಂಬ ಆಶಯದಲ್ಲಿ ಸರ್ಕಾರಗಳು ಉತ್ತಮ ಯೋಜನೆ ಕಾರ್ಯಾಗತ ಗೊಳಿಸಿದ್ದು, ಸೈಕಲ್ ವಿತರಣೆ ಕೂಡ ಒಂದು. ಸೈಕಲ್ ನ್ನು ಸದುಪಯೋಗ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಲು ಜಿ.ಪಂ.ಸದಸ್ಯೆ ಶುಭಾಕೃಷ್ಣಮೂರ್ತಿ ಕರೆ ನೀಡಿದರು.
ಹೊಸನಗರ ತಾಲೂಕಿನ ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕ ಕೆ.ಬಾಲಚಂದ್ರ ವಹಿಸಿದ್ದರು.
ಗ್ರಾಪಂ ಸದಸ್ಯರಾದ ಕಣಕಿ ಮಹೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ನಾಗರಾಜ್, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.

ಹಿರಿಯ ಶಿಕ್ಷಕ ಪ್ರಕಾಶ್ ಜಿ ಸ್ವಾಗತಿಸಿದರು. ಪ್ರಕಾಶ್ ವಾರದ್ ವಂದಿಸಿದರು. ಭವ್ಯ ಟಿ.ಎಸ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment