Wednesday, February 5, 2014

ಹೊಂಬುಜಮಠಕ್ಕೆ ಅರಣ್ಯ ಸಚಿವ ರಮಾನಾಥ ರೈ ಬೇಟಿ


ಪದ್ಮಾವತಿದೇವಿ ದರ್ಶನದಲ್ಲಿರುವ ಸಚಿವ ರೈ
ಶ್ರೀಮಠದ ಆಡಳಿತ ಮಂಡಳಿ ವತಿಯಿಂದ ಸಚಿವರಿಗೆ ಸನ್ಮಾನ
ಹೊಸನಗರ:ತಾಲೂಕಿನ ಇತಿಹಾಸ ಪ್ರಸಿದ್ಧ ಹೊಂಬುಜಮಠಕ್ಕೆ ಅರಣ್ಯ ಸಚಿವ ರಮಾನಾಥರೈ ಬುಧವಾರ ಬೇಟಿ ಪದ್ಮಾವತಿದೇವಿಗೆ ಪೂಜೆ ಸಲ್ಲಿಸಿದರು.
ಶ್ರೀಮಠಕ್ಕೆ ಬೇಟಿ ನೀಡಿದ ಸಂದಭ೯ದಲ್ಲಿ ಹೊಂಬುಜ ಮಠದ ದೇವೇಂದ್ರ ಕೀತಿ೯ ಸ್ವಾಮೀಜಿಗಳು ಬೆಂಗಳೂರು ಕಾಯ೯ಕ್ರಮಕ್ಕೆ ತೆರಳಿದ್ದು ಮಠದಲ್ಲಿ ಉಪಸ್ಥಿತಿ ಇರಲಿಲ್ಲ.
ಸಚಿವ ರೈಗೆ ಶ್ರೀಮಠದಿಂದ ಸನ್ಮಾನ
ಖಾಸಗಿಯಾಗಿ ಬೇಟಿ ನೀಡಿದ್ದು ಹೊಂಬುಜ ಮಠಕ್ಕೆ ಬರಬೇಕೆಂದು ಹಿಂದೆಯೆ ಸಂಕಲ್ಪ ಮಾಡಿದ್ದು ಅದರಂತೆ ಬೇಟಿ ನೀಡಿದ್ದಾರೆ. ಸಂದಭ೯ದಲ್ಲಿ ಮಠದ ಆಡಳಿತದ ವತಿಯಿಂದ ಸಚಿವರವನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಮಠದ ಆಡಳಿತಾಧಿಕಾರಿ ಜಿ.ಜೆ.ಪದ್ಮನಾಭಯ್ಯ, ಮಾಜಿ ಶಾಸಕ ಪಟಮಕ್ಕಿ ರತ್ನಾಕರ್, ವ್ಯವಸ್ಥಾಪಕ ಧನ್ಯಕುಮಾರ್, ತೀಥ೯ಹಳ್ಳಿ ಡಾ.ಜೀವಂಧರ್, ಗ್ರಾಪಂ ಸದಸ್ಯ ದೇವೇಂದ್ರ ಮಠದ ಪ್ರತಿನಿಧಿಗಳು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

No comments:

Post a Comment