Tuesday, January 28, 2014

ಕುಗ್ರಾಮದ ಸರ್ಕಾರಿ ಶಾಲೆಗಳು ಸುವರ್ಣ ಮಹೋತ್ಸವ ಆಚರಣೆ ಸಂತಸ ತಂದಿದೆ

ಕುಂಬಳೆ ಶಾಲಾ ಸುವಣ೯ ಸಂಭ್ರಮದಲ್ಲಿ ಕಾಗೋಡು ತಿಮ್ಮಪ್ಪ
 ಹೊಸನಗರ:ಇಂದು ಶಿಕ್ಷಣ ವ್ಯವಸ್ಥೆ ಬದಲಾವಣೆ ಹಾದಿಯಲ್ಲಿದೆ. ಶಾಲೆ ಸಮಸ್ಯೆಗಳ ಮೂಲ ಕೊರತೆಯನ್ನು ನೀಗಿಸುವಲ್ಲಿ ಸಕಾ೯ರ ಮನ ಮಾಡಿದ್ದು ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ಕಾಗೋಡುತಿಮ್ಮಪ್ಪ ಹೇಳಿದರು.
ಕುಂಬಳೆ ಶಾಲೆಯ ಸುವರ್ಣ ಸಂಭ್ರಮಕ್ಕೆ ಕಾಗೋಡುತಿಮ್ಮಪ್ಪ ಚಾಲನೆ ನೀಡಿದರು.
ಮಂಜಗಳಲೆ ಸಮೀಪದ ಕುಂಬಳೆ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶನಿವಾರಚಾಲನೆ ನೀಡಿ  ಮಾತನಾಡಿದ ಅವರು ಶಾಲೆಗಳ ಪ್ರಗತಿಯ ದೃಷ್ಟಿಯಲ್ಲಿ ಸಕಾ೯ರ ಯಾವತ್ತು ಎಡವಬಾರದು. ಅದರಲ್ಲೂ ಗ್ರಾಮೀಣ ಭಾಗದ ಶಾಲೆಗಳ ಸರ್ವತೋಮುಖ ಅಭಿವೃದ್ದಿ ಸಕಾ೯ರದ ಪ್ರಮುಖ ಕಾರ್ಯಕ್ರಮವಾಗಬೇಕು. ನಿಟ್ಟಿನಲ್ಲಿ ಸಕಾ೯ರ ಸಾಗಿದರೆ ಮಾತ್ರ ಯಶಸ್ಸು ಸಾಧ್ಯ ಎಂದರು.
ಸಂತಸ:
 ಕುಗ್ರಾಮಗಳಲ್ಲೂ ಉತ್ತಮ ಶಾಲೆಗಳಿವೆ. 50,100 ವರ್ಷಗಳನ್ನೂ ಪೂರೈಸಿರುವ ಶಾಲೆಗಳು ಇಂದಿಗೂ ಜನರ ಜೀವನಾಡಿ ಆಗಿವೆ. ಆಂದು ಬೆಳ್ಳಕ್ಕ ಲಕ್ಷ್ಮಿನಾರಾಯಣಪ್ಪರ  ಮನೆಯಲ್ಲಿ ಆರಂಭವಾದ ಶಾಲೆ ಇಂದು ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಅದರಲ್ಲೂ ಇಲ್ಲಿನ ಜನತೆ ತಮ್ಮ ಮನೆಯ ಹಬ್ಬದಂತೆ ಸಂಭ್ರಮದಲ್ಲಿರುವುದು ನಿಜಕ್ಕೂ ಸಂತಸಕರ ಸಂಗತಿಎಂದರು.
ಸಂದರ್ಭದಲ್ಲಿ ಕುಂಬಳೆ ಉಷಾ ಲಕ್ಷ್ಮಿನಾರಾಯಣಪ್ಪ ಅವರನ್ನು ಸನ್ಮಾನಿಸಿಲಾಯಿತು. ಸಮಿತಿಅಧ್ಯಕ್ಷ ಕೆ.ಎಲ್.ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ತಾ.ಪಂ ಮಲ್ಲಿಕಾ ಸುರೇಂದ್ರ, ನಿಟ್ಟೂರು ಗ್ರಾ.ಪಂ ಸವಿತಾಗಿರೀಶ್, ಸುಕನ್ಯಾರಾಧಾಕೃಷ್ಣ, ಚಂದ್ರಶೇಖರ ಶೆಟ್ಟಿ, ಹಾಲ ಸಿದ್ದಪ್ಪ,  ಮಲ್ಲಾಡಿಗಿರೀಶ್ಕ್ಯಾಫ್ಟನ್ ದಿನೇಶ್, ಸಮಿತಿ ಕಾಯ೯ದಶಿ೯ . ರಾಮಚಂದ್ರ ,ದೊಡ್ಮನೆ ಲಕ್ಷ್ಮಿನಾರಾಯಣ ಹಾಜರಿದ್ದರು.

No comments:

Post a Comment