Tuesday, February 4, 2014

ಹೊಸನಗರ-ಪಟಗುಪ್ಪ ಸಕಾ೯ರಿ ಬಸ್ಸಿಗೆ ಸ್ಪೀಕರ್ ಕಾಗೋಡು ಚಾಲನೆ


ಈಡೇರಿದ ಪಟಗುಪ್ಪ ವಾಸಿಗಳ ಬಹುದಿನದ ಕನಸು
ಹೊಸನಗರ:ಪಟ್ಟಣದ ಪ್ರಮುಖ ಬಸ್ ನಿಲ್ದಾಣದ ಆವರಣದಲ್ಲಿ ನೂತನವಾಗಿ ಪ್ರಾರಂಭಿಸಲಾದ ಪಟಗುಪ್ಪ-ಹೊಸನಗರ ಕೆಎಸ್ಆರ್ ಟಿಸಿ ಬಸ್ಸು ಸಂಚಾರಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಂಗಳವಾರ ಚಾಲನೆ ನೀಡಿದರು.
ಪಟಗುಪ್ಪ ಮಾಗ೯ಕ್ಕೆ ಸಕಾ೯ರಿ ಬಸ್ಸಿಗೆ ಕಾಗೋಡರಿಂದ ಚಾಲನೆ
ತಾಲೂಕಿನ ಬಹುತೇಕ ಗ್ರಾಮಾಣಪ್ರದೇಶಗಳಲ್ಲಿ ಬಸ್ಸಿನ ಸೌಲಭ್ಯ ಇರದಿರುವುದು ನನ್ನ ಗಮನದಲ್ಲಿದ್ದು ಹೆಚ್ಚಿನ ಬಸ್ಸನ್ನು ಒದಗಿಸುವ ಬಗ್ಗೆ ಗಮನಹರಿಸುತ್ತೇನೆ ಎಂದರು.
ಸಕಾ೯ರಿ ಬಸ್ಸನ್ನು ಒದಗಿಸಿದರೂ ಕೂಡ ಟೈಮಿಂಗ್ಸ್ ಪಮಿ೯ಟ್ ದೊಡ್ಡ ಸಮಸ್ಯೆ. ಬಗ್ಗೆ ಕೂಡ ಅಧಿಕಾರಿಗಳಿಗೆ ಎಚ್ಚಿರಿಸಿದ್ದು ಯಾವುದೆ ಲಾಭಿಗೆ ಮಣಿಯದೆ ಕೆಎಸ್ಆರ್ ಟಿಸಿ ಬಸ್ಸಿನ ಸಂಚಾರಕ್ಕೆ ಸಹಕರಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಜಿಪಂ ಸದಸ್ಯ ಕಲಗೋಡು ರತ್ನಾಕರ್, ಎಪಿಎಂಸಿ ಅಧ್ಯಕ್ಷ ಅನಂತರಾವ್, ಸದಸ್ಯ ಕಲ್ಯಾಣಪ್ಪಗೌಡ, ಪಪಂ ಸದಸ್ಯರಾದ ರತ್ನಾಕರಶೆಟ್ಟಿ, ಚಂದ್ರಶೇಖರ್ ಶೇಟ್, ಪ್ರಮುಖರಾದ ಪಟೇಲ್ ಗರುಡಪ್ಪಗೌಡ, ಬಾಬುಕಾಮತ್, ಜಯನಗರ ಗುರು, ಪಟ್ಟಣದ ಪ್ರಮುಖರು ಮತ್ತು ಪಟಗುಪ್ಪದ ನಿವಾಸಿಗಳು ಪಾಲ್ಗೊಂಡಿದ್ದರು.

2 comments: