Sunday, February 2, 2014

ಕಾಗೋಡು ಸಭೆ ನೆಪದಲ್ಲಿ ಮುಂದೂಡಿದ ತಾಪಂ ಸಭೆ ಮುಂದೂಡಿಕೆ


 ಬಿಜೆಪಿ ಸದಸ್ಯರ ಅಸಮಾದಾನ
 ಹೊಸನಗರ: ವಿಧಾನಸಭಾಧ್ಯಕ್ಷ ಕಾಗೋಡುತಿಮ್ಮಪ್ಪರ ಅಭಿವೃದ್ದಿ ಸಭೆ ನೆಪವೂಡ್ಡಿದ ಅಧಿಕಾರಿಗಳು ಇಂದು ನಡೆಯಬೇಕಿದ್ದ ತಾ.ಪಂ ಸಾಮಾನ್ಯ ಸಭೆಯನ್ನು ಮುಂದೂಡಿದ ಪ್ರಸಂಗದಿಂದ ಸಭೆಯಲ್ಲಿದ್ದ ಬಿಜೆಪಿ ಸದಸ್ಯರು ಅಸಮಾದಾನ ಸೂಚಿಸಿ ಸಭೆಯಲ್ಲಿ ಗದ್ದಲ ನಡೆಸಿದ ಘಟನೆ ತಾ,ಪಂ ಸಭಾಂಗಣದಲ್ಲಿ ನಡೆಯಿತು.
ಹೊಸನಗರ ತಾ.ಪಂ ಸಾಮಾನ್ಯ ಸಭೆಯಲ್ಲಿ ನಡೆದ ಪರಸ್ಪರ ಚರ್ಚೆ
ಮುಂಚಿತವಾಗಿ ನಿಗದಿಯಾಗಿದ್ದ ತಾ.ಪಂ ಸಾಮಾನ್ಯ ಸಭೆಗೆ  ಅಧ್ಯಕ್ಷರು,ಸದಸ್ಯರೆಲ್ಲರೂ ಆಗಮಿಸಿದ್ದರು. ಇನ್ನೇನು ಸಭೆ ಕಾಯಾ೯ಕಲಾಪ ಪ್ರಾರಂಭವಾಗಬೇಕು ಎನ್ನುವಾಗ ಮಧ್ಯ ಪ್ರವೇಶಿಸಿದ ತಾ.ಪಂ ಅಧಿಕಾರಿಗಳು, ಇಂದು ಕಾಗೋಡು ಸಭೆ ನಡೆಯುವುದರಿಂದ ಎರಡೆರಡು ಸಭೆ ನಡೆಸಲು ಕಷ್ಟವಾಗುತ್ತೆ. ಅಧ್ಯಕ್ಷರಿಗೂ ಕಷ್ಟ ಹಾಗಾಗಿ ಸಾಮಾನ್ಯ ಸಭೆಯನ್ನು ರದ್ದು ಮಾಡಿ ಮುಂದೂಡಲು ಅಣಿಯಾದರು.
 ಆಗ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಸುಮಾ, ಮಂಜುನಾಥ್ಗೌಡ, ವೀರೇಶ್ ಆಲುವಳ್ಳಿ, ಸಮಾನ್ಯ ಸಭೆ ನಡೆಯುವುದೆ 3 ತಿಂಗಳಿಗೊಮ್ಮೆ ಅದರಲ್ಲಿ ಕಾಗೋಡು ಸಭೆ ನೆಪದಲ್ಲಿ ಸಭೆ ರದ್ದಾದರೆ ಜನರಿಗೆ ಏನು ಉತ್ತರಿಸೋದು. ದಿಡೀರ್ ಸಭೆ ರದ್ದು ಮಾಡುವ ಅಧಿಕಾರಿ ವರ್ತನೆ ಸಾಧುವಲ್ಲ ಸಭೆ ನಡೆಯಲಿ ಎಂದು ಹಠ ಹಿಡಿದರು. ಆಗ ಕಾಂಗ್ರೆಸ್ ಸದಸ್ಯರಾದ ಗೀತಾ ನಿಂಗಪ್ಪ, ಕುಭೇರಪ್ಪ ಮಾತನಾಡಿ, ತಾಲೂಕು ಅಭಿವೃದ್ದಿಯಲ್ಲಿ ಸಲ್ಲದ ಅಸಮಾದಾನ ಬೇಡ. ಕಾಗೋಡು ಅಭಿವೃದ್ದಿ ಪರ ಸಭೆ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ ಸಭೆ ಮುಂದೂಡಲಿ ಎಂದು ಬಿಗಿಪಟ್ಟು ಹಿಡಿದರು.
 ಸಭೆಯಲ್ಲಿ ಒಮ್ಮೆ ಕಾವೇರಿದ ವಾತವರಣ ನಿಮಾ೯ಣವಾಗಿ ಪರ ವಿರೋಧ ಚಚೆ೯ಗಳು ನಡೆದವು. ಕೊನೆಗೆ ಅಧ್ಯಕ್ಷೆ ನಾಗರತ್ನ ದೇವರಾಜ್ ಸೂಚನೆ ಮೇರೆಗೆ ಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಣೆ ಮಾಡಲಾಯಿತು.
 

No comments:

Post a Comment