Saturday, February 15, 2014

ಸಮಾಜಕ್ಕಾಗಿ ಮಾಡಿದ ಕಾಯ೯ ವ್ಯಥ೯ವಾಗುವುದಿಲ್ಲ :: ಗೋವಾ ಜೀವೋತ್ತಮ ಮಠದ ವಿದ್ಯಾಧಿರಾಜ ಸ್ವಾಮೀಜಿ


ನಗರ ಗುಜರಿಪೇಟೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಿಂದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಮತ್ತು ಪಾದಪೂಜೆ
ಹೊಸನಗರ:ಉತ್ತಮ ವ್ಯಕ್ತಿತ್ವ ನಿಮಾ೯ಣದಲ್ಲಿ ಧಮ೯ದ ಕಾಯ೯ ಮತ್ತು ಸಮಾಜಸೇವೆ ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೆ ಸಮಾಜದ ಒಳಿತಿಗಾಗಿ ಮಾಡಿದ ಕಾಯ೯ ವ್ಯಥ೯ವಾಗುವುದಿಲ್ಲ ಎಂದು ಗೋವಾದ ಪತ೯ಗಾಳಿ ಜೀವೋತ್ತಮ ಮಠದ ವಿದ್ಯಾಧಿರಾಜ ತೀಥ೯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗುಜರಿಪೇಟೆ ವೆಂಕಟರಮಣ ದೇಗುಲಕ್ಕೆ ಗುರುಗಳ ಆಗಮನ
ತಾಲೂಕಿನ ನಗರದ ಗುಜರಿಪೇಟೆ ವೆಂಕಟರಮಣ ಕಲಾಭವನದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಮ್ಮಿಕೊಂಡಿದ್ದ ಕಾಯ೯ಕ್ರಮದಲ್ಲಿ ಆಶೀವ೯ಚನ ನೀಡಿ, ಯಾವುದೆ ಕಾಯ೯ವನ್ನಾದರೂ ನಿಷ್ಠೆಯಿಂದ ಮಾಡಬೇಕು ಎಂದರು.
ಬಿದನೂರು ಸಂಸ್ಥಾನದಲ್ಲಿ ಸಾರಸ್ವತರು
ಕೆಳದಿ ಅರಸರ ರಾಜಧಾನಿಯಾಗಿ ಗಮನ ಸೆಳೆದ ಬಿದನೂರು ಸಂಸ್ಥಾನದಲ್ಲಿ ರಾಜಾಶ್ರಯ ಮತ್ತು ಸ್ಥಾನ ಪಡೆಯುವ ಮೂಲಕ ಸಾರಸ್ವತರು ಸಮಾಜ ಸೇವೆ ನಿರತರಾಗಿದ್ದನ್ನು ಸ್ಮರಿಸಬಹುದು.ಇತಿಹಾಸದ ಕಾಲದಿಂದಲೂ ಬಿದನೂರಿನೊಂದಿಗೆ ಸಾರಸ್ವತರ ಬಾಂಧವ್ಯ ಅನನ್ಯವಾಗಿದೆ ಎಂದರು.
ಸಮಾಜ ಅಧ್ಯಕ್ಷರಿಂದ ಗೌರವ ಸಮರ್ಪಣೆ
ಸಾರಸ್ವತ ಸಮಾಜ ಸಾರವಂತ, ಶ್ರಮಜೀವಿ, ಬುದ್ದಿವಂತ ಸಮಾಜವಾಗಿ ಗುರುತಿಸಲ್ಪಡುತ್ತದೆ. ದೇವಾಲಯಗಳ ಅಭಿವೖದ್ಧಿ ಮತ್ತು ಧಾಮಿ೯ಕ ಕಾಯ೯ದ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ನಡೆಸುವುದು ಸೇರಿದಂತೆ ಸಮಗ್ರ ಅಭಿವೖದ್ಧಿ ಸಾಧ್ಯ ಎಂದರು.
ಸಮಾಜ ಬಾಂಧವರು
ಸಂದಭ೯ದಲ್ಲಿ ನಗರ ಆಗಮಿಸಿದ ಶ್ರೀಗಳನ್ನು ಫೂಣ೯ಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಸಮಾಜದ ಹತ್ತು ಸಮಸ್ತರಿಂದ ಮತ್ತು ಪರಊರಿನ ಬಾಂಧವರಿಂದ ಗುರುಗಳ ಪಾದಪೂಜೆ ನೆರವೇರಿಸಲಾಯಿತು.
ನಗರ ಗುಜರಿಪೇಟೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸಿ.ರಾಮಚಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀಗಳ ಆಗಮನ
ತೀಥ೯ಹಳ್ಳಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ರಾಮದಾಸ್ ಕಾಮತ್, ಪ್ರಮುಖರಾದ ಶ್ರೀನಿವಾಸ ಕಾಮತ್, ರಾಘವೇಂದ್ರ ಪೈ, ವಿಠಲಭಟ್, ನಾರಾಯಣ ಕಾಮತ್, ನಿಟ್ಟೂರು ವೆಂಕಟರಮಣ ಪ್ರಭು, ಮಾಸ್ತಿಕಟ್ಟೆ ರವೀಂದ್ರ ಪ್ರಭು, ಮುಕುಂದಕಾಮತ್, ಮತ್ತು. ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ವೇದಮೂತಿ೯ ರಮಾನಂದ ಭಟ್ ಪ್ರಾಥಿ೯ಸಿದರು. ಕೆ.ಭಾಸ್ಕರಭಟ್ ಸ್ವಾಗತಿಸಿದರು. ಸುರೇಶ್ ಭಟ್ ವಂದಿಸಿದರು.

No comments:

Post a Comment