Tuesday, May 27, 2014

ರಾಮಯ್ಯ ಸ್ಮರಣಾಥ೯ ಉಚಿತ ಹೖದಯ ರೋಗ ತಪಾಸಣಾ ಶಿಬಿರ



ನಗರ ಚೇತನಾ ಬಳಗ ಯುವಕರರಿಂದ ಜನೋಪಯೋಗಿ ಕಾರ್ಯಕ್ರಮ
ಹೊಸನಗರ: ಇತ್ತೀಚೆಗೆ ನಿಧನರಾದ ಎಪಿಎಂಸಿ ಸದಸ್ಯ ರಾಮಯ್ಯ ಸ್ನರಣಾಥ೯ ನಗರ ಚೇತನ ಬಳಗದ ವತಿಯಿಂದ ಉಚಿತವಾಗಿ ಹೖದಯ ಸಂಬಂಧಿ ರೋಗದ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿತ್ತು.
ನಗರ ಸಂಯುಕ್ತ ಸಕಾ೯ರಿ ಆಸ್ಪತ್ರೆ ಆವರಣದಲ್ಲಿ ನಡೆದ ಶಿಬಿರದಲ್ಲಿ ಮಂಗಳೂರು ಇಂಡಿಯನ್ ಆಸ್ಪತ್ರೆಯ ಖ್ಯಾತ ವೈದ್ಯರು ಶಿಭಿರಾಥಿ೯ಗಳ ಹೖದಯ ತಪಾಸಣೆ ಕೈಗೊಂಡರು. ಸುಮಾರು 200ಕ್ಕು ಹೆಚ್ಚು ಶಿಬಿರರಾಥಿ೯ಗಳು ಭಾಗವಹಿಸಿದ್ದು ಅದರಲ್ಲಿ ಮುಂದಿನ ಚಿಕಿತ್ಸೆಗಾಗಿ 30 ಶಿಬಿರಾಥಿ೯ಗಳನ್ನು ಗುರುತಿಸಲಾಯಿತು.
ಮೌನಾಚರಣೆ:
ಇದಕ್ಕು ಮುಂಚಿತವಾಗಿ ಅಗಲಿದ ರಾಮಯ್ಯರಿಗೆ 1 ನಿಮಿಷ ಮೌನಾಚರಣೆ ಮಾಡುವುದರ ಮೂಲಕ ಗೌರವಾಪ೯ಣೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ಚೇತನ ಬಳಗದ ನಿದೇ೯ಶಕ ವಿಕ್ರಮ್, ಬಡವರು, ಕೂಲಿಕಾಮಿ೯ಕರ ಆರೋಗ್ಯ ಸಮಸ್ಯೆಗೆ ತುತಾ೯ಗಿ ಸ್ಪಂದಿಸುತ್ತಿದ್ದ ರಾಮಯ್ಯ ಸ್ತರಣಾಥ೯ವಾಗಿ ಶಿಬಿರವನ್ನು ಆಯೋಜಿಸಲಾಗಿತ್ತು. ಜನೋಪಯೋಗಿ ಇಂತಹ ಕಾಯ೯ಕ್ರಮಗಳ ಸದುಪಯೋಗವನ್ನು ಎಲ್ಲರು ಪಡೆಯಲು ಮುಂದಾಗಬೇಕು ಎಂದರು.
ಬಸ್ ವ್ಯವಸ್ಥೆ:
ಮುಂದಿನ ಚಿಕಿತ್ಸೆಗೆ ಗುರುತಿಸಲಾದ 30 ಜನರಿಗೆ ಮಂಗಳೂರು ಇಂಡಿಯನ್ ಆಸ್ಪತ್ರೆಗೆ ಹೋಗಿಬರಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು ಮೇ.30 ಭಾನುವಾರ ಬೆಳಿಗ್ಗೆ 10 ಗಂಟೆ ನಗರ ಬಸ್ ನಿಲ್ದಾಣದಿಂದ ಹೊರಡಲಿದೆ. ಶಿಬಿರಾಥಿ೯ಗಳು ಸೌಲಭ್ಯ ಪಡೆದುಕೊಳ್ಳಲು ವಿಕ್ರಮ್ ಮನವಿ ಮಾಡಿದರು.
ಚೇತನಾ ಬಳಗದ ಅನಂತ ಕಂಚುಗಾರ್ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಇಂಡಿಯನ್ ಆಸ್ಪತ್ರೆಯ ಡಾ.ನಾಗನಾಥ್, ಡಾ.ಸಫ್ರಾಜ್ ನವಾಜ್, ಡಾ.ತೇಜಸ್ವಿ ನಗರ, ಡಾ.ಯಜ್ಞಶ್ರೀ ನಾಗನಾಥ್, ಚೇತನಾ ಬಳಗದ ನಿದೇ೯ಶಕರಾದ ಅಶೋಕದಾಸ್, ಗುರುರಾಜ್ ಶೇಟ್, ವಿಜಯ ಎಸ್. ಪ್ರಸಾದ್ ವಿ ಕಿಣಿ, ಪ್ರದೀಪಗೌಡ ಮತ್ತು ಮಂಗಳೂರು ಇಂಡಿಯನ್ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

No comments:

Post a Comment