Tuesday, May 27, 2014

ಬಡರೈತ ಕೂಲಿಕಾಮಿ೯ಕರಿಗೆ ಅಗತ್ಯ ಮಾಹಿತಿ ನೀಡಿ


ನಗರದಲ್ಲಿ ಸಿಂಡಿಕೇಟೆ ಬ್ಯಾಂಕ್ ಗ್ರಾಹಕರ ಸಭೆ
ಹೊಸನಗರ:ರಾಷ್ಟ್ರೀಕೖತ ಬ್ಯಾಂಕಿನ ಸೇವಾಸೌಲಭ್ಯದ ಬಗ್ಗೆ ಮತ್ತು ಬಡರೈತ ಕೂಲಿಕಾಮಿ೯ಕರು ಬ್ಯಾಂಕ್ ನ್ನು ಬಳಸಿಕೊಳ್ಳುವ ಸಲುವಾಗಿ ಅಗತ್ಯ ಮಾಹಿತಿ ನೀಡುವ ಅಗತ್ಯವಿದೆ ಎಂದು ಗ್ರಾಹಕ ದೇವಗಂಗೆ ಶಿವರಾಮ ಮನವಿ ಮಾಡಿದರು.
ತಾಲೂಕಿನ ನಗರದಲ್ಲಿ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಭೆಯಲ್ಲಿ ಮಾತನಾಡಿ, ಯಾವುದೆ ಬ್ಯಾಂಕ್ ಕಾಳಜಿಯುಕ್ತ ಸೇವೆ ನೀಡಿದರೆ ಇಡೀ ಗ್ರಾಮವನ್ನು ಅಭಿವೖದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದರು.
ಸಭೆಯಲ್ಲಿ ಶಿವರಾಮ್ ಮಾತನಾಡಿದರು.
ಮುಖ್ಯಅತಿಥಿ ದೇವಗಂಗೆ ಚಂದ್ರಶೇಖರ ಶೆಟ್ಟಿ, ಸಾಕಷ್ಟು ಬಡರೈತರು ಮತ್ತು ಕೂಲಿಕಾಮಿ೯ಕರು ಸಾಲವನ್ನು ಕಟ್ಟಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಒನ್ ಟೈಂ ಸೆಟ್ಲಮೆಂಟ್ ಆಧಾರದಲ್ಲಿ ಅವರಿಗೆ ಸೂಕ್ತ ರಿಯಾಯಿತಿ ನೀಡಿ ಮತ್ತೆ ಬ್ಯಾಂಕ್ ವ್ಯವಹಾರಕ್ಕೆ ಅನುವು ಮಾಡಿಕೊಡಬೇಕು. ಸಮಸ್ಯೆ ಬಗ್ಗೆ ಬ್ಯಾಂಕಿ ಉನ್ನತಾಧಿಕಾರಿಗಳಲ್ಲಿ ತಿಳಿಸಿ ಪರಿಹಾರಕ್ಕೆ ಯತ್ನಿಸುವಂತೆ ಮನವಿ ಮಾಡಿದರು.
ಸಿಂಡಿಕೇಟ್ ಬ್ಯಾಂಕಿನ ಸಹಾಯಕ ಪ್ರಬಂಧಕ ಅಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಗಣಪತಿ, ಗ್ರಾಪಂ ಸದಸ್ಯ ನಾಗೇಶ್, ಶಂಕಣ್ಣ ಚಿಕ್ಕಪೇಟೆ, ರಮಾನಂದ್, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಬ್ಯಾಂಕಿನ ಶ್ರೀನಿವಾಸ್ ನಿರೂಪಿಸಿದರು. ಸುಲತಾ ಬ್ಯಾಂಕಿನ ಸೌಲಭ್ಯದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ವಂದಿಸಿದರು.

No comments:

Post a Comment