Saturday, July 19, 2014

ಕೊಡಚಾದ್ರಿ ಸಮೀಪದ ರಸ್ತೆ ಕುಸಿತ ಸಂಪಕ೯ದ ಆತಂಕದಲ್ಲಿ ಸ್ಥಳೀಯ ನಿವಾಸಿಗಳು

ಹೊಸನಗರ:ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಪ್ರಸಿದ್ಧ ಕೊಡಚಾದ್ರಿ ಗಿರಿಗೆ ತೆರಳುವ ಗೌರಿಕೆರೆ - ಕಟ್ಟಿನಹೊಳೆ ಮಾಗ೯ ಮದ್ಯದಲ್ಲಿ ರಸ್ತೆ ಭಾರೀ ಕುಸಿತ ಕಂಡಿದೆ.
ಶುಕ್ರವಾರ ಬೆಳಿಗ್ಗೆ ಕುಸಿತ ಕಂಡು ಬಂದಿದ್ದು, ಈ ಮಾಗ೯ದಲ್ಲಿ ವಾಹನ ಸಂಪಕ೯ ಕಡಿತಗೊಂಡಿದೆ. ರಸ್ತೆ ಕುಸಿತದಿಂದಾಗಿ ಕುಂಬ್ಳೆ, ಮಂಜಗಳಲೆ, ಕಟ್ಟಿನೊಳೆ ಸೇರಿದಂತೆ ಕುಸಿತ ಕಂಡ ರಸ್ತೆ ಮಾಗ೯ದ ಸಂಪಕ೯ ಹೊಂದಿರುವ ಗ್ರಾಮಗಳಿಗೆ ಸಂಪಕ೯ ಇಲ್ಲದಂತಾಗಿದೆ. ಬಸ್ಸಿನ ಸಂಪಕ೯ ಕೂಡ ಸಾಧ್ಯವಾಗದ ಹಿನ್ನಲೆಯಲ್ಲಿ ಶಾಲಾ ಕಾಲೇಜಿಗೆ ಬರುವ ವಿದ್ಯಾಥಿ೯ಗಳಿಗೆ ದಿಕ್ಕು ತೋಚದಂತ ಪರಿಸ್ಥಿತಿ ನಿಮಾ೯ಣವಾಗಿದೆ.
ರಸ್ತೆ ಕುಸಿದಿರುವ ಹಿನ್ನಲೆಯಲ್ಲಿ ವಿದ್ಯಾಥಿ೯ಗಳು ಸುಮಾರು 8 ಕಿಮೀ ನಡದೇ ಬರಬೇಕಾದ ಪರಿಸ್ಥಿತಿ ಇದೆ. ಸುತ್ತಾಕಿ ಸಂಪೇಕಟ್ಟೆ ಮಾಗ೯ದಿಂದ ಬರಬಹುದಾದರು ಬಸ್ಸಿನ ವ್ಯವಸ್ಥೆ ಇಲ್ಲ.
ಪ್ರವಾಸಿಗಳಿಗೆ ತೊಂದರೆ:
ವಿಶ್ವ ಪ್ರಸಿದ್ಧ ಕೊಡಚಾದ್ರಿ ಅದರಲ್ಲು ಮಳೆ ಪ್ರಾರಂಭ ಆದ ನಂತರ ಜೀವಕಳೆ ತುಂಬಿಕೊಂಡಿರುವ ಹಿಡ್ಲಮನೆ ಫಾಲ್ಸ್್ಗೆ ಹೋಗಲು ಇದೇ ಮಾಗ೯ ಪ್ರಮುಖವಾಗಿದ್ದು ಪ್ರವಾಸಿಗರು ಈ ತಾಣಕ್ಕೆ ತೆರಳಲು ಕಷ್ಟಸಾಧ್ಯವಾಗಿದೆ.
ಸ್ಥಳೀಯರ ಆಕ್ರೋಶ:
ಕಳೆದ ಎರಡು ವಷ೯ದಿಂದ ರಸ್ತೆ ನಿವ೯ಹಣೆ ಮಾಡದಿರುವುದು ಮತ್ತು ಮುಂಜಾಗ್ರತೆ ವಹಿಸದಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಅಮ್ಲಾಡಿ ಸತೀಶ್ ಸೇರಿದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಕಿಮ್ಮನೆ ರತ್ನಾಕರ್ ಸ್ಥಳಕ್ಕಾಗಮಿಸಿ ಪರಿಶೀಲಿಸಬೇಕು ಮತ್ತು ಶಾಲಾ ಮಕ್ಕಳು, ಪ್ರವಾಸಿಗರು ಮತ್ತು ಸುತ್ತಮುತ್ತಲಿನ ಜನತೆ ಸಂಪಕ೯ ಸಾಧಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

No comments:

Post a Comment