Wednesday, May 28, 2014

"ಅರಣ್ಯ ಸಂಪತ್ತು ವೖದ್ಧಿಸಿದರೆ ದೇಶ ಸಮೖದ್ಧಿ" - ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಅಭಿಮತ


ಪರಿಸರ ಜಾಗೖತಿ ಬಗ್ಗೆ ಚಕ್ರವಾಕ ಸುಬ್ರಹ್ಮಣ್ಯ ಉಪನ್ಯಾಸ ನೀಡಿದರು.

ಹೊಸನಗರ:ಅರಣ್ಯ ಸಂಪತ್ತು, ವನ್ಯಜೀವಿಗಳು ಹೇರಳವಾದರೆ ಮಾತ್ರ ನಮ್ಮ ದೇಶ ಸಮೖದ್ಧಿಗೊಳ್ಳುತ್ತದೆ ಮಾತ್ರವಲ್ಲ ಉತ್ತಮ ವಾತಾವರಣದ ಬದುಕು ಸಾಧ್ಯ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ದಾರೆ.
  ತಾಲೂಕಿನ ಕಿಳಂದೂರು ಗ್ರಾಮ ಅರಣ್ಯ ಸಮಿತಿ ಕಾಯ೯ಕ್ರಮದಲ್ಲಿ ಉಪನ್ಯಾಸ ನೀಡಿ, ಇಂದು ವಾತಾವರಣದಲ್ಲಿ ಅಸಮತೋಲನ ಎದ್ದು ಕಾಣುತ್ತಿದೆ ಇದರ ಪರಿಣಾಮ ಅಕಾಲಿಕ ಮಳೆ, ಉಷ್ಣಾಂಶ ತೀವ್ರತೆ ಕಂಡು ಬರುತ್ತಿದೆ. ಕಾಡಿನ ನಿರಂತರ ನಾಶವೆ ಇದಕ್ಕೆಲ್ಲ ಮೂಲ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗೖತಿ ಅಗತ್ಯ: ಪರಿಸರದ ಮೇಲೆ ಆಗುತ್ತಿರುವ ನಿರಂತರ ದೌಜ೯ನ್ಯದಿಂದಾಗಿ ಬದುಕು ದಿಕ್ಕುಪಾಲಾಗುತ್ತಿದೆ ಬಗ್ಗೆ ಎಚ್ಚರ ಅಗತ್ಯ. ಕಾಡಿನ ನಾಶದಿಂದಾಗಿ ಅಂತಜ೯ಲ ಪಾತಾಳ ಸೇರುತ್ತಿದ್ದು ಕುಡಿಯುವ ನೀರಿನ ಬವಣೆ ವಿಪರೀತವಾಗುತ್ತಿದೆ. ಇವೆಲ್ಲ ನಾವೆ ತಂದುಕೊಂಡ ಆಪತ್ತು ಇನ್ನು ಮೇಲಾದರು ಬಗ್ಗೆ ಜಾಗೖತಿ ಕಾಯ೯ ಮಾಡದಿದ್ದಲ್ಲಿ ನಮ್ಮನ್ನು ಯಾರು ರಕ್ಷಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಉಪವಲಯ ಅರಣ್ಯಾಧಿಕಾರಿ ಮಧುಕರ್ ರಿಂದ ಮಾಹಿತಿ
ಗ್ರಾಮಸ್ತರ ಸಹಭಾಗಿತ್ವ:
ಉಪವಲಯ ಅರಣ್ಯಾಧಿಕಾರಿ ಮಧುಕರ್, ಅರಣ್ಯ ಸಂರಕ್ಷಣೆಗೆ ಸಂರಕ್ಷಣೆಗೆ ಎಷ್ಟೆ ಕಾನೂನು ತಂದರು ಗ್ರಾಮಸ್ಥರ ಸಹಭಾಗಿತ್ವ ಇಲ್ಲದೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ 2004ರಲ್ಲಿ ಗ್ರಾಮ ಅರಣ್ಯ ಸಮಿತಿ ಚಾಲನೆಗೆ ಬಂದಿದ್ದು ಇದರ ಜವಾಬ್ದಾರಿಯನ್ನು ಗ್ರಾಮಸ್ತರು ಅರಿಯಬೇಕಿದೆ.
ಗ್ರಾ.ಅ.ಸಮಿತಿ ಅಧ್ಯಕ್ಷ ಶಂಕ್ರಪ್ಪಗೌಡರ ಮಾತು
ಅರಣ್ಯ ಸಮಿತಿಯಿಂದ ಬೆಳೆಸಲಾದ ನಡುತೋಪಿನಿಂದ ಬರುವ ಆದಾಯದಲ್ಲಿ ಶೇ.50 ರಷ್ಟು ಅರಣ್ಯ ಸಮಿತಿಗೆ ದೊರಕುತ್ತಿದ್ದು, ಇದರಿಂದ ಅರಣ್ಯ ಅಭಿವೖದ್ಧಿ ಮತ್ತು ಗ್ರಾಮದ ಅಭಿವೖದ್ಧಿ ಕಾಯ೯ ಮಾಡಲು ಸಹಕಾರಿಯಾಗಿದೆ. ನಿಟ್ಟಿನಲ್ಲಿ ಗ್ರಾಮಸ್ತರು ಸಮಿತಿಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಪಸಕ್ತ ಕಿಳಂದೂರು ಅರಣ್ಯ ಸಮಿತಿಗೆ ರು.1.5 ಲಕ್ಷ ಹಣ ಬಂದಿದ್ದು ಗ್ರಾಮದ ಅಭಿವೖದ್ಧಿಗೆ ಬಳಸಬಹುದಾಗಿದೆ ಎಂದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್.ವೈ.ಶಂಕರಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಕರಿಮನೆ ಗ್ರಾಪಂ ಉಪಾಧ್ಯಕ್ಷ ಎನ್.ವೈ.ಸುರೇಶ್ ಕಾಯ೯ಕ್ರಮ ಉದ್ಘಾಟಿಸಿದರು.
ಗ್ರಾಪಂ ಸದಸ್ಯ ಹೆಚ್.ಜಿ.ದೇವೇಂದ್ರ, ವನಜಾ ಚನ್ನಪ್ಪಗೌಡ, ಎಂ.ಎನ್.ಕಾಂತಪ್ಪ, ವಿ.ಡಿ.ದಿನೇಶ್, ಗ್ರಾಮದ ಪ್ರಮುಖರು, ಸ್ವಸಹಾಯ ಸಂಘದ ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

No comments:

Post a Comment