ಬಿದನೂರು: 2014 ಮೇ 11ನೇ ಭಾನುವಾರ ನಮ್ಮೂರ ಪಾಲಿಗೆ ದುರಂತ ದಿನ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಬಡವ ಬಲ್ಲಿದ, ದೊಡ್ಡವರು ಸಣ್ಣವರು, ಅಷ್ಟೆ ಏಕೆ ಜಾತಿ ಮತ ತಾರತಮ್ಯವಿಲ್ಲದೆ ಸಹಾಯ ಹಸ್ತ ಚಾಚಿ ಬಂದವರಿಗೆ ನೈತಿಕ ಶಕ್ತಿ ಜೊತೆ ಆರ್ಥಿಕ ಶಕ್ತಿ ನೀಡಿ ಅವರ ಕಣ್ಣೀರು ಒರೆಸುತ್ತಿದ್ದ ಮಹಾಚೇತನ ಅಂತ್ಯ ಕಂಡ ದಿನ ಅದು.
![]() |
| ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ರೊಂದಿಗೆ ರಾಮಯ್ಯ |
![]() |
| ಹಿರಿಯ ಸಹೋದರ ಕೃಷ್ಣ ಕಾಮತ್ ಜೊತೆ |
ಎಪಿಎಂಸಿ ಸದಸ್ಯರಾಗಿ, ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿ, ಬಿದನೂರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾಗಿ, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ, ಮಾರಿಕಾಂಬ ದೇವಸ್ಥಾನ ಸಮಿತಿಯ ಕೋಶಾಧ್ಯಕ್ಷರಾಗಿ ಮತ್ತು ಹಲವು ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದ ಅವರಿಗೆ ತಮ್ಮ ಬದ್ಧತೆ ಎಷ್ಟಿತ್ತು ಎಂದರೆ ಆಯಾಯ ಸಂಸ್ಥೆಗಳ ಬೆಳವಣಿಗೆ ಮತ್ತು ಕಾರ್ಯವೈಖರಿಯೇ ಸಾಕ್ಷಿ. ಖ್ಯಾತ ಯಕ್ಷಗಾನ ಕಲಾವಿದ ನಗರ ಜಗನ್ನಾಥ ಶೆಟ್ಟಿಯವರ ಸಂಸ್ಮರಣೆಯಾಗಿ ಆಂಬುಲೆನ್ಸ್ ತರಬೇಕು ಎಂಬ ಅವರ ಆಶಯ ಇಂದು ಈಡೇರುವ ಹಂತದಲ್ಲಿದೆ. ಆದರೆ ಈ ಹೊತ್ತಿನಲ್ಲಿ ಅವರೇ ನಮ್ಮೊಂದಿಗಿಲ್ಲ ಎಂಬ ಕೊರತೆ ನಮ್ಮನ್ನು ಕಾಡುತ್ತಲೇ ಇದೆ.
![]() |
| ಕಾಗೋಡು ತಿಮ್ಮಪ್ಪ ಜೊತೆ |
ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಇದನ್ನು ಬಳಸಿಕೊಂಡು ತಮ್ಮದೇ ಕನಸಿನ ನಗರ ನಿರ್ಮಾಣದ ಆಶಯ ಹೊಂದಿದ್ದರು ಮಾತ್ರವಲ್ಲ ಹಂತಹಂತವಾಗಿ ಚಾಲನೆ ನೀಡಿದ್ದರು.![]() |
| ಮಾಸ್ತಿಕಟ್ಟೆ ಟೀಂನೊಂದಿಗೆ ಬೆಂಗಳೂರು ಶಕ್ತಿಭವನದಲ್ಲಿ |
ಉತ್ತಮರ ಒಡನಾಟ, ಅಧಿಕಾರ ಯಾವುದೇ ಇದ್ದರೂ ಸ್ವಂತಕ್ಕಾಗಿ ಯಾವತ್ತು ಬಳಸಿಕೊಳ್ಳದ ರಾಮಯ್ಯ ಜನತೆಯ ಹಿತಚಿಂತನೆಯಲ್ಲೆ ತಮ್ಮನ್ನು ಸಮರ್ಪಿಸಿಕೊಂಡಿದ್ದು ಮಾತ್ರ ಸುಳ್ಳಲ್ಲ. ಹಾಗಾಗಿಯೇ ಇವರು ಯಾವ ಪಕ್ಷದಲ್ಲಿದ್ದರೂ ಎಲ್ಲರ ಪ್ರೀತಿ ಗೌರವ ಗಳಸಿದ್ದರು.
ಒಟ್ಟಿನಲ್ಲಿ ಇತಿಹಾಸದ ಪುಟದಲ್ಲಿ ಮತ್ತು ಜನತಂತ್ರ ವ್ಯವಸ್ಥೆಯಲ್ಲಿ ತ್ಯಾಗಕ್ಕಾಗಿ ಎಲ್ಲವನ್ನು ಕಳೆದುಕೊಂಡ ನಗರ ಹೋಬಳಿಯ ಪುನರುಜ್ಜೀವನದ ಆಶಯ ಹೊಂದಿದ್ದವರ ಪಾಲಿಗೆ ರಾಮಯ್ಯ ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿದ್ದರು.
![]() |
| ನಗರದ ಸುವರ್ಣ ಸಂಭ್ರಮದಲ್ಲಿ |
![]() |
| ಅಮ್ಮ ಜಯಲಕ್ಷ್ಮಿರಾವ್, ಅಣ್ಣ ಅಜಯ್ ಪತ್ನಿ ರಾಧಿಕಾ ಜೊತೆ |
ಎಲ್ಲರೂ... ಬನ್ನಿ
ಅವರ ಸೇವೆಯನ್ನು ನೆನೆಯೋಣ
ಅವರಿಗೆ ಭಾವಪೂರ್ಣ ನಮನ ಸಲ್ಲಿಸೋಣ
ಆ ಮೂಲಕ ಅವರ ಕುಟುಂಬಕ್ಕೆ ಮತ್ತು ನಮ್ಮೆಲ್ಲರಿಗೂ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲು ದೇವರಲ್ಲಿ ಪಾರ್ಥಿಸೋಣ.






No comments:
Post a Comment