ನಗರದ ಮಾಣಿಕ್ಯ ರಾಮಯ್ಯರಿಗೆ ಭಾವಪೂರ್ಣ ನುಡಿನಮನ
| ನಗರ ರಾಮಯ್ಯರ ಭಾವಚಿತ್ರಕ್ಕೆ ಹೂವು ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. |
| ತುರ್ತು ಚಿಕಿತ್ಸಾ ಘಟಕಕ್ಕೆ ರು.10 ಲಕ್ಷ ನೆರವು |
ರಾಮಯ್ಯ ಅಧ್ಯಕ್ಷತೆಯಲ್ಲಿ ಈ ಹಿಂದೆ ಅಸ್ತಿತ್ವಕ್ಕೆ ಬಂದ ಬಿದನೂರು ಸಾಂಸ್ಕೖತಿಕ ವೇದಿಕೆಗೆ ಹಣ ವಗಾ೯ಯಿಸಲಾಗಿದ್ದು ಆ ಮೂಲಕವೆ ಘಟಕದ ಸ್ಥಾಪನೆ ಕಾಯ೯ ನಡೆಯಲಿದೆ.
ನುಡಿನಮನ:
ಇದಕ್ಕು ಮುನ್ನ ಗುಜರಿಪೇಟೆ ಕಲಾಭವನದಲ್ಲಿ ನಡೆದ ನುಡಿನಮನ ಕಾಯ೯ಕ್ರಮದಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್ ರಾಮಯ್ಯ ಭಾವಚಿತ್ರಕ್ಕೆ ಹೂವು ಹಾಕುವುದರ ಮೂಲಕ ಭಾವಪೂಣ೯ ಶ್ರದ್ಧಾಂಜಲಿ ಸಲ್ಲಿಸಲಾಯಿತು ಬಳಿಕ 2 ನಿಮಿಷಗಳ ಮೌನ ಆಚರಸುವುದರೊಂದಿಗೆ ರಾಮಯ್ಯ ಆತ್ಮಕ್ಕೆ ಶಾಂತಿ ಕೋರಲಾಯಿತು.
ನಂತರ ಮಾತನಾಡಿದ ಸ್ವಾಮಿರಾವ್, ಊರಿನ ಬಗ್ಗೆ ಕಳಕಳಿ ಹೊಂದಿದ್ದ ರಾಮಯ್ಯ ನಗರದ
ಆಸ್ತಿಯಾಗಿದ್ದರು. ಕೂಲಿಕಾಮಿ೯ಕರು, ಬಡರೈತರು ಮತ್ತು ದುಬ೯ಲವಗ೯ದವರ ಪಾಲಿಗೆ
ಆಪತ್ಬಾಂಧವರಾಗಿದ್ದ ಅವರು ಜನರ ಎಲ್ಲಾ ಸಂಕಷ್ಟಗಳಿಗು ಸ್ಪಂದಿಸುತ್ತಿದ್ದರು ಎಂದರು.
ರಾಮಯ್ಯ ಕುಟುಂಬವೇ ಬಹಳ ಹಿಂದಿನಿಂದ ಜನರ ಏಳಿಗೆಯ ಬಗ್ಗೆ ಚಿಂತಿಸುತ್ತ ಬಂದಿದ್ದು
ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿತ್ತು. ಚಿಕ್ಕವಯಸ್ಸಿನಲ್ಲೆ ರಾಮಯ್ಯ
ನಿಧನರಾಗಿರುವುದು ನಗರ ಹೋಬಳಿಯ ಪಾಲಿಗೆ ತುಂಬಲಾರದ ನಷ್ಟವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಸತೀಶಗೌಡ, ರಾಮಯ್ಯ ಯಾವುದೆ ಪಕ್ಷದಲ್ಲಿದ್ದರೂ ಎಲ್ಲ ಪಕ್ಷಗಳಲ್ಲು ಅವರ ಅಭಿಮಾನಿಗಳಿದ್ದರು. ಸಹಕಾರ ಕೋರಿ ಬಂದವರ ಪಕ್ಷ ಯಾವುದು ಯಾವ ಜಾತಿ ಎಂದು ನೋಡದ ಅವರು ಎಲ್ಲ ರೀತಿ ಸಹಕಾರ ನೀಡುತ್ತಿದ್ದುದು ಅವರ ದೊಡ್ಡಗುಣವಾಗಿತ್ತು ಎಂದರು.
ರಾಮಯ್ಯ ಸಹೋದರ ಕೖಷ್ಣ ಕಾಮತ್, ತಮ್ಮ ರಾಮಿ ಜನರ ಬಗ್ಗೆ ಊರಿನ ಬಗ್ಗೆ ಅತೀವ ಕಾಳಜಿ ಹೊಂದಿದ್ದು ಅವನ ಆಶಯ ಈಡೇರಿಸುವ ನಿಟ್ಟಿನಲ್ಲಿ ಕಾಯೋ೯ನ್ಮುಖನಾಗಲಿದ್ದು ಎಲ್ಲರ ಸಹಕಾರ ಕೋರಿದರು.
ಯಡೂರು ರಾಜಾರಾಂ ಸ್ವಾಗತಿಸಿದರು. ಸಿ.ವಿ.ಪಾಂಡುರಂಗರಾವ್ ನಿರೂಪಿಸಿದರು. ಗೋಪಾಲಶೆಟ್ಟಿ ವಂದಿಸಿದರು.
ಫೋಟೋ23khos1
23khos2 ರಾಮಯ್ಯ ಸ್ತರಣಾಥ೯ ತುತು೯ ಚಿಕಿತ್ಸಾ ಘಟಕ ಸ್ಥಾಪನೆಗೆ ಸಚಿವ ಕಿಮ್ಮನೆ ನೀಡಿದ ರು.10 ಲಕ್ಷ ನೆರವನ್ನು ಅವರ ಸಹೋದರರು ಜಯಲಕ್ಷ್ಮಿ ರಾವ್ ಗೆ ನೀಡಿದರು.
No comments:
Post a Comment